ಕವನ

ಮೈ ತಪ್ಪೆ
ಮನ ತಪ್ಪೆ?
ಎರಡೂ ಕೂಡಿ ಕುಣಿದ ಗಣಿತದ,
ತಿಂದ ಸಿಹಿ ಖಾರ ಬೇರಿಗೆ ಜಾರಿ
ಚೀರಿದ ಚಿಲುಮೆಯ
ಸುಖ ತಪ್ಪೆ ?
ಭಗವದ್ಗೀತೆಯ ಹಿಂದೆ ಮುಂದೆಯೇ
ನೂರು ಹಗರಣ
ಸಮತೆ ಶಾಂತಿ ಶಿಸ್ತಿನ ನಡುವಿನಲೇ
ಥಟ್ಟನೆ ಜಗಣ!

ಏ ಚೆನ್ನೆ, ಈ
ಸೀ ಕೆನ್ನೆ
ಹೆಗಲಡಿ ಹಬ್ಬಿದ ಬಿಳಿದಿನ್ನೆ
ಕಾಯಿಸಿ ಬೇಯಿಸಿ ತೋಯಿಸಿ, ಸೋಕಲು
ಕಚ್ಚಿ ರಸಚಿಲಿವ ಉರಿಸೊನ್ನೆ,
ಮತ್ತ ಬಾಳೆಕಂಬದ ನಡುವೆ
ವೃತ್ತಗಂಧಿ ಮಿದುಸುಡುಶಯ್ಯೆ
ನೋಯಿಸಿವೆ ಮೈ
ಮಾಯಿಸಿವೆ
ಮುಕ್ತಿಸೂತ್ರಗಳ ಮರೆತ ಗಳಿಗೆಯಲಿ
ಭಗವದ್ಯೋಗದಿ ಮೀಯಿಸಿವೆ.

ಈಚೀಚೆ
ಏನೋ ಮಾತು
ಎಲ್ಲೋ ಕೂತು
ಯಾವುದೊ ನೋವಿಗೆ ಹವ್ವನೆ ಬಾತು
ಹೂ ಮುಳ್ಳು ನಗೆ
ನಿಜ ಸುಳ್ಳು ಧಗೆ
ಮದಾಲಸೆಯ ಮೈ ನೆಗೆತ ಕುಸಿತದಲಿ ಕಲೆತು
ಸರಿಗಮ ಪದನಿಸ ದನಿಯೊಡೆದು
ಹೊಯಭಂಗಿಗಳಿಗೆ ಮಿಡಿದು
ತುಡಿನುಡಿ ಮುಖಾಂತರ
ಲಯದಲಿ
ಮೂಡಿದ ಭವಾಂತರ
ಬುದ್ದಿಯ ಹಂಗಿಗು ಮೀರಿ ನಿಲ್ಲುವ
ಹಿಗ್ಗಿನ ಆವಾಂತರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಳಿರಲಿಲ್ಲವೇ
Next post ಹದಿನಾರರ ಹರೆಯ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys